ಪ್ರಥಮ ಹಂತ ಮುಗಿಸಿದ ಯಾರೇ ಕೂಗಾಡಲಿ
Posted date: 08 Wed, Aug 2012 ? 10:49:27 AM

ಪೂರ್ಣಿಮಾ ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ಡಾ|| ರಾಜ್‌ಕುಮಾರ್ ಅರ್ಪಿಸಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ ಯಾರೇ ಕೂಗಾಡಲಿ ಚಿತ್ರದ ಪ್ರಥಮ ಹಂತದ ಚಿತ್ರೀಕರಣವು ಇದೇ ೧ ರಂದು ನಗರದಲ್ಲಿ ಮುಕ್ತಾಯಗೊಂಡಿತು.

೧೮ ದಿವಸಗಳ ಕಾಲ ನಡೆದ ಚಿತ್ರದ ಚಿತ್ರೀಕರಣದಲ್ಲಿ ಪುನೀತ್ ರಾಜ್‌ಕುಮಾರ್, ಯೋಗೀಶ್, ಭಾವನ, ಸಾಧುಕೋಕಿಲ, ಸಿಂಧೂ ಅಭಿನಯದ ಹಲವಾರು ಸನ್ನಿವೆಶಗಳನ್ನು ನಗರದ ಸುತ್ತಮುತ್ತ ಸುಕುಮಾರ್ ಛಾಯಾಗ್ರಹಣದಲ್ಲಿ ನಿರ್ದೇಶಕ ಸಮುದ್ರ ಖಣಿ ಚಿತ್ರಿಸಿಕೊಂಡರು.

ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವು ಈ ತಿಂಗಳ ೨೦ ರಿಂದ ಆರಂಭವಾಗಲಿದೆ ಎಂದು ನಟ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ.

ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ, ಹರಿಕೃಷ್ಣ ಸಂಗೀತ, ಸುಕುಮಾರ್ (ತಮಿಳು ಮೈನಾ ಖ್ಯಾತಿ) ಛಾಯಾಗ್ರಹಣ, ಜಾಕ್ಸನ್ (ಫರುತ್ತಿ ವೀರನ್ ಖ್ಯಾತಿ) ಕಲೆ, ದೀಪು.ಎಸ್. ಕುಮಾರ್ ಸಂಕಲನ, ರವಿವರ್ಮ ಸಾಹಸ, ರುದ್ರೇಶ್ ಎಂ.ಗೌಡ ನಿರ್ದೇಶನ ಸಹಕಾರ, ಚೆನ್ನ ನಿರ್ಮಾಣ ಮೇಲ್ವಿಚಾರಣೆ, ಮಲ್ಲಿಕಾರ್ಜುನ್ ನಿರ್ಮಾಣ-ನಿರ್ವಹಣೆ ಇದ್ದು, ತಮಿಳಿನ ನಾಡೋಡಿಗಳ್, ಪೋರಾಲಿ, ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೆಶಿಸಿದ ಹೆಸರಾಂತ ನಿರ್ದೇಶಕ ಸಮುದ್ರ ಖಣಿ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆ ಹೊತ್ತಿದ್ದಾರೆ.

ಪುನೀತ್ ರಾಜ್‌ಕುಮಾರ್, ಯೋಗೀಶ್, ಭಾವನ, ಸಾಧುಕೋಕಿಲ, ಶೋಭರಾಜ್, ಸಿಂಧು, ನಾಗೇಂದ್ರ, ಆಶಾರಾಣಿ, ವರ್ಷಕೃಷ್ಣ, ಚಂದ್ರು, ಅಚ್ಚುತರಾವ್, ಲಕ್ಷ್ಮೀಹೆಗ್ಡೆ, ಮೈಕೋ ನಾಗರಾಜ್, ಸುರೇಶ್‌ಚಂದ್ರ, ರಾಕೇಶ್ ಅಡಿಗ, ರವಿಶಂಕರ್, ಅಚ್ಯುತ್‌ಕುಮಾರ್, ಸಂದೀಪ್, ವಿಜಯ್ ಕೌಂಡಿನ್ಯ, ಡ್ಯಾನಿ ಕುಟ್ಟಪ್ಪ, ಅಖಿಲಾ, ನಿರೋಷ, ಬೇಬಿ ಭೂಮಿ, ಅಕ್ಷಯ್, ಹರೀಶ್, ಶ್ರೀನಿವಾಸ್, ರಂಜಿತ್, ಧೀರಜ್ ಸೂರ್ಯ, ಲಕ್ಷ್ಮೀಪತಿ, ಶೂಟಿಂಗ್ ಕೃಷ್ಣ, ರಾಧಾಕೃಷ್ಣ ತುಮಕೂರು ಮೋಹನ್ ಮುಂತಾದವರು ಇದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed